Slide
Slide
Slide
previous arrow
next arrow

ವಿದ್ಯುತ್ ಕಂಬದಿಂದ ಬಿದ್ದು ಗಾಯಗೊಂಡ ವ್ಯಕ್ತಿ

300x250 AD

ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿಂದ ಬಿದ್ದ ಪರಿಣಾಮ ಆತನ ಕೈ-ಕಾಲು ಮುರಿದಿದ್ದು, ಘಟನೆ ನಡೆದ ಒಂದುವರೆ ತಿಂಗಳ ನಂತರ ಅಲೆಸಿಯನ್ ಸಿದ್ದಿ ತಾಯಿ ಮೇರಿ ಪೊಲೀಸ್ ದೂರು ನೀಡಿದ್ದಾರೆ.

ದುರ್ಗಾ ಎಲೆಕ್ಟ್ರಿಕಲ್ಸ್ ಗೋಪಾಲಕೃಷ್ಣ ಕರುಮನೆ ಎಂಬಾತರಿಗೆ ಸೇರಿದ್ದಾಗಿದ್ದು, ಅವರು ವಿದ್ಯುತ್ ಗುತ್ತಿಗೆದಾರರಾಗಿದ್ದಾರೆ. ಆ.1ರಂದು ತಂತಿ ಎಳೆಯುವುದಕ್ಕಾಗಿ ಕಂಬ ಏರಿದ ಅಲೆಸಿಯನ್ ಮರಿಯಾನ ಸಿದ್ದಿ ಕಂಬದ ಮೇಲಿನಿಂದ ಕೆಳಗೆ ಬಿದ್ದಿದ್ದು, ಮರವೊಂದಕ್ಕೆ ಸಿಲುಕಿಕೊಂಡಿದ್ದರು. ಮೇಲಿನಿಂದ ಬಿದ್ದ ರಭಸಕ್ಕೆ ಅವರ ಎಡಗಾಲಿನ ಮೂಳೆ ಹಾಗೂ ಎಡ ಕೈ ಮುರಿತಗೊಂಡಿದ್ದು, ತಕ್ಷಣ ಅಲ್ಲಿದ್ದ ಇತರರು ಅಲೆಸಿಯನ್ ಮರಿಯಾನ ಸಿದ್ದಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು.

300x250 AD

ಒಂದುವರೆ ತಿಂಗಳ ನಂತರ ಇದೀಗ ಅಲೆಸಿಯನ್ ಮರಿಯಾನ ಸಿದ್ದಿ ಅವರ ತಾಯಿ ಮೇರಿ ಮರಿಯಾನ ಸಿದ್ದಿ ದುರ್ಗಾ ಎಲೆಕ್ಟ್ರಿಕಲ್ಸ್’ನ ಮಾಲಕ ಗೋಪಾಲಕೃಷ್ಣ ಕರುಮನೆ ವಿರುದ್ಧ ತನ್ನ ಮಗನಿಗೆ ಸುರಕ್ಷತಾ ಸಾಮಗ್ರಿ ನೋಡದೇ ಕಂಬದ ಮೇಲೆ ಏರಿಸಿದ ಕಾರಣ ಈ ಅಪಾಯ ನಡೆದಿದೆ ಎಂಬುದಾಗಿ ಪೊಲೀಸ್ ದೂರು ನೀಡಿದ್ದಾರೆ.

Share This
300x250 AD
300x250 AD
300x250 AD
Back to top